ಶೈನ್ಸಿಟಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುದೇಶ್ ಭಂಡಾರಿ ಅವರು ನಿರ್ಮಿಸುತ್ತಿರುವ ‘ಚಲ್ಲಾಪಿಲ್ಲಿ ಚಿತ್ರ ಈ ತಿಂಗಳ ೨೩ರಂದು ಆರಂಭವಾಗಲಿದೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರಿನಲ್ಲಿ ಚಿತ್ರಕ್ಕೆ ಎರಡು ಹಂತಗಳ ಚಿತ್ರೀಕರಣ ನಡೆಯಲಿದೆ.
ಹದಿನಾರು ವರ್ಷಗಳಿಂದ ರಂಗಭೂಮಿಯಲ್ಲಿ ಅನುಭವ ಪಡೆದಿರುವ ಹಾಗೂ ಹಲವು ತುಳು ಚಿತ್ರಗಳಿಗೆ ಸಹನಿರ್ದೇಶಕರಾಗಿ ದುಡಿದಿರುವ ಸಾಯಿಕೃಷ್ಣ(ಕುಡ್ಲ) ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಯನ್ನು ಸಾಯಿಕೃಷ್ಣ ಅವರೇ ಬರೆದಿದ್ದಾರೆ.
ವಿಜಯರಾಘವೇಂದ್ರ ನಾಯಕರಾಗಿ ಅಭಿನಯಿಸುತ್ತಿವ ಈ ಚಿತ್ರದ ನಾಯಕಿಯಾಗಿ ಐಶ್ವರ್ಯನಾಗ್ ನಟಿಸುತ್ತಿದ್ದಾರೆ. ಶೋಭರಾಜ್, ನವೀನ್ಪಟೇಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸುಂದರ್ ರೈ, ಮಂದಾರ ಹಾಗೂ ಮಂಗಳೂರಿನ ರಂಗಭೂಮಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಪಿ.ಎಲ್.ರವಿ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಮಿಕ್ಕು ಸಂಗೀತ ನೀಡುತ್ತಿದ್ದಾರೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಹರ್ಷ, ರಾಜೇಶ್, ಮಾಲೂರುಶ್ರೀನಿವಾಸ್ ನೃತ್ಯ ನಿರ್ದೇಶನ, ಬಾಬುಖಾನ್ ಕಲಾನಿರ್ದೇಶನ ಹಾಗೂ ಸುಹಾಸ್ ಸಹನಿರ್ದೇಶನ ‘ಚಲ್ಲಾಪಿಲ್ಲಿ ಚಿತ್ರಕ್ಕಿದೆ.